ಹೆಮ್ಮಿಗೆ ಪುರದ ಸಂಜೀವ್ ಕುಮಾರ್ ಅವರ ಹೆಮ್ಮೆಯ ಕಾಣಿಕೆ ‘ಮಧುರ ಸ್ವಪ್ನ’ ಮಾತಿನ ಭಾಗದ ಚಿತ್ರೀಕರಣ ಮೂಗಿಸಿ ಏಪ್ರಿಲ್ ಮೊದಲ ವಾರದಲ್ಲಿ ಹಾಡುಗಳ ಧ್ವನಿ ಸುರುಳಿ ಬಿಡುಗಡೆಗೆ ಸಿದ್ದವಾಗುತ್ತಿದೆ. ‘ಮಧುರ ಸ್ವಪ್ನ’....ಎ ಗ್ಲೋರಿ ಆಫ್ ಡ್ರೀಮ್ ಲವ್ ಈಗ ಡಿ ಟಿ ಎಸ್ ಹಂತವನ್ನು ತಲುಪಿ ಮಾತಿನ ಭಾಗದ ಚಿತ್ರೆತರ ಚಟುವಟಿಕೆ ಬಿರುಸಿನಿಂದ ಸಾಗುತ್ತಾ ಇದೆ.
ಮೊದಲ ಪ್ರಯತ್ನದಲ್ಲಿ ನಿರ್ಮಾಪಕ ಸಂಜೀವ್ ಕುಮಾರ್ ಅವರು ಹೆಸರಾಂತ ತುಳು ನಾಟಕಕಾರ ದೇವದಾಸ್ ಕಾಪಿಕಾಡ್ ಅವರ ಪುತ್ರ ಅರ್ಜುನ್ ಕಾಪಿಕಡ್ ಅವರನ್ನು ಕನ್ನಡ ಸಿನಿಮಾಕ್ಕೆ ನಾಯಕನಾಗಿ ಪರಿಚಯಿಸುವುದರೊಂದಿಗೆ, ಕೀರ್ತನ ಪೊಡ್ವಲ್ ಎಂಬ ನಾಯಕಿಯನ್ನು ಪರಿಚಯಿಸಿದ್ದಾರೆ. ತೆಲುಗು ಭಾಷೆಯಲ್ಲಿ ‘ಅನಿತಾ ಒ ಅನಿತಾ....ಹಾಡಿನಿಂದ ಖ್ಯಾತಿ ಪಡೆದ ಸಂಗೀತ ನಿರ್ದೇಶಕ ರವಿ ಕಲ್ಯಾಣ್ ಅವರನ್ನು ಕನ್ನಡ ಸಿನಿಮಾಕ್ಕೆ ಬರಮಾಡಿಕೊಂಡಿದ್ದಾರೆ. ಏಳು ಹಾಡುಗಳು ಈಗ ಸಿದ್ದವಾಗಿದ್ದು ಚಿತ್ರೀಕರಣ ಆಗಬೇಕು.
ನಿರ್ಮಾಪಕ ಸಂಜೀವ್ ಕುಮಾರ್ ಅವರ ಪ್ರಕಾರ ‘ಮಧುರ ಸ್ವಪ್ನ’ ಒಂದು ಮುದ್ದಾದ ಪ್ರೇಮಕಥೆ, ಮುದ್ದಾದ ನಿರೂಪಣೆ ಇಂದ ಕೂಡಿದೆ. ಪ್ರೀತಿಸುವ ಹೃದಯಗಳಿ?? ಹಾಗೂ ಹೆತ್ತವರಿಗೂ ಸಂಬಂದ ಪಟ್ಟ ವಿಚಾರವನ್ನು ಗಟ್ಟಿಯಾದ ನಿರೂಪಣೆ ಇಂದ ಹೇಳುತ್ತಿದ್ದಾರೆ ನಿರ್ದೇಶಕ ರವಿರತ್ನ ಅವರು.
ಬೆಂಗಳೂರು, ಕೋಲಾರ, ಕೆ ಜಿ ಎಫ್, ಸಕ??ಶಪುರ, ಮಂಗಳೂರು ‘ಮಧುರ ಸ್ವಪ್ನ’ ಸಿನಿಮಾಕ್ಕೆ ಚಿತ್ರೀಕರಣವಾದ ಸ್ಥಳಗಳು. ಪೋಷಕ ಕಲಾವಿದರಲ್ಲಿ ಅವಿನಾಷ್,ವಿನಯಪ್ರಕಾಶ್, ಅಶೋಕ್, ಮುಖ್ಯಮಂತ್ರಿ ಚಂದ್ರು, ರಾಮಕೃಷ್ಣ, ಯಶವಂತಪುರದ ಶಾಸಕ ಸೋಮಶೇಖರ್ ಹಾಗೂ ಇತರರು ಇದ್ದಾರೆ.
ಈಶ್ವರ್ ಅವರ ಸಂಕಲನ, ಹರಿಕೃಷ್ಣ ಅವರ ನೃತ್ಯ ನಿರ್ದೇಶನ, ವಿನೋದ್ ಅವರ ಸಾಹಸ ಈ ಚಿತ್ರಕ್ಕೆ ಒದಗಿಸಿದ್ದಾರೆ.